ಸೋಮವಾರ, ಜನವರಿ 3, 2011

ಗುರು ನಮನ

ಗುರು ನಮನ

ನಮಿಪೇ ಶ್ರೀ ಸ್ವರ್ಣವಲ್ಲೀಶ,

ನಮಿಪೇ ಶ್ರೀ ಸರ್ವಜ್ನೆಂದ್ರ ಕರಕಮಲ ಸಂಜಾತ ,

ನಮಿಪೇ ಸಕಲ ಭಕ್ತರಿಗೆ ಸನ್ಮಂಗಲವ ನಿಡುವಂಗೆ,

ನಮಿಪೇ ಶ್ರೀ ಗುರು ಗಂಗಾದರೆಂದ್ರ ರಿಗೆ .


ಸಹ್ಯಾದ್ರಿ ಪುರ ದೀಶ,

ಗೋಕರ್ಣ ಮಂಡಲಾ ದೀಪ ,

ಸುದಾಪುರಿ ಪುರ ಈಶ,

ಶಾಲ್ಮಲಾ ತೀರವಾಸ.


ಧರ್ಮ ,ಕರ್ಮಾನುಸ್ಟಾನ ಗಳ ,ಕಟ್ಹೊರ ತಪೂನಿರತ ,

ದ್ಯಾನ, ಜ್ಞಾನಗಳ ಅಗಣಿತ ಬಂಡಾರ ,

ವೇದ ತತ್ತ್ವಗಳ ದಾರ್ಶನಿಕ.


ತಾಯಿ ರಾಜೇಶ್ವರಿಯ ಕ್ರಪಾಚಾರಣದಲ್ಲಿ,

ಶ್ರೀ ಚಂದ್ರಮೌಳೇಶ್ವರ ಸನ್ನಿದಿಯಲ್ಲಿ,

ಶ್ರೀ ಲಕ್ಷ್ಮಿ ನರಸಿಂಹರ ಸೇವೆಗೈಯುತ ,

ಶ್ರೀ ಚಕ್ರ ಪೂಜೆಗೈಯುತ್ತಿರುವ ಯತಿ ಶ್ರೇಷ್ಠ .


ಮನುಕುಲದ ಉಳುವಿಗೆ ಪ್ರಕತಿ ಮಾತೆಯ ರಕ್ಷಣೆಗೆ ,

ಹಸಿರು ಸ್ವಾಮಿಯೆಂದೇ,ಖ್ಯಾತಿ ಹೊಂದಿರುವೆ .

ಲೋಕೊದ್ದಾರದ ಪ್ರವರ್ಥಕನಾಗಿ,

ಭಗವದ್ಗೀತೆ ಅಭಿಯಾನಗೈಯುತಿರುವೆ .


ನೀವು ತೋರಿದ ದಾರಿ ,

ನಮಗೆ ಮುಕ್ತಿಯ ಮಾರ್ಗ ,

ಇದೋ ನನ್ನ ನಮನ ಗುರು ಚರಣಕೆ,

ಬೇಡುವೆನು ನಿಮ್ಮ ಕಾರುಣ್ಯ ರಕ್ಷೆ ನಮ್ಮೆಲ್ಲರಿಗೆ.

ಸೋಮವಾರ, ಜುಲೈ 12, 2010

ವಸಂತನ ನಿರೀಕ್ಷೆ


ವಸಂತನ ನಿರೀಕ್ಷೆ

ಶಿಶಿರ ರ್ರುತು ಕಳೆದು
ಛಳಿಯ ಮುಸುಕನು ತೆಗದು
ವಸಂತನ ಆಗಮನಕೆ ಸ್ವಾಗತಿಸುವೆ .
ರ್ರುತು ಕರ್ತ ದಿವಾಕರನು
ತನ್ನ ಪ್ರಕರತೆಯ ಹೆಚ್ಚಿಸುತ
ನಿನ್ನಗಮಾನವ ಸುಚಿಸುತಿಹನು
ಆಷಾಡದ ಜಡಿಮಳೆಗೆ ಮಯೋಡ್ಡಿ
ಮಾಗಿ ಚಳಿಗೂ ಹೆದರದೆ
ನಿನ್ನಾಗಮನಕೆ ಹಂಬಲಿಸುತಿರುವೆ

ರಾಮನ ಬರವನು ಶಬರಿ ಕಾಯ್ದಂತೆ
ಅನೂ ದಿನವೂ ನಾ ಇಲ್ಲೆನಿಂತು
ನಿನಗಾಗಿ ಕಾಯುತಿಹೆನು
ನಿನ್ನ ನಿರೀಕ್ಷೆಯಲಿ ನಾ
ಬಸವಳಿದು ಒಣಗಿ ಸುಸ್ತಾಗಿ
ನಿನ್ನ ಸ್ವಾಗತಕೆ ನಿಂತಿರುವೆ
ಬೇಗ ಬಾ ವಸಂತ ,ನನ್ನೊಡಲ ತುಂಬು
ನನಗೆ ಹೊಸ ಚೈತನ್ಯವ ನೀಡು
ಒಣಗಿ ನಿಂತ ನನ್ನ ಬಾಳ ಹಸುರಾಗಿಸು
ಇದೋ ನನ್ನ ಸ್ವಾಗತವು ನಿನಗೆ
ನನ್ನಂತೆ ಸಕಲ ಜೀವಿಗಳು ಕಾದಿಹರು
ಊದ್ದರಿಸು ಜಗಕೆ ಹೊಸ ಚೈತನ್ಯ ನೀಡಿ